Wednesday, April 9, 2008

ರಜನಿ, ಕನ್ನಡಿಗರ ಪಾಲಿಗೆ ಘಜನಿ!

ಹೊಗೆನಕಲ್ ವಿವಾದ ಕನ್ನಡಿಗರ ಪಾಲಿಗೆ ಹಲವು ನಟರ ವೇಷ ಕಳಚಿಸಿದ ಸಾಧನವಾಯಿತು. ಇದರಲ್ಲಿ ಪ್ರಮುಖವಾದದ್ದು ಇತ್ತೀಚಿನವರೆಗೂ ತನ್ನ ಜನಪ್ರಿಯತೆಗೆ ಹೆದರಿ ಮಾರುವೇಷದಲ್ಲಿ ಬೆಂಗಳೂರಿನಲ್ಲಿ ಓಡಾಡಿ ಕುಷಿಪಡುತ್ತಿದ್ದ ನಮ್ಮವನೆ ಎಂದು ಕನ್ನಡಿಗರು ಹಿಂದೆ ಹೆಮ್ಮೆಪಡುತ್ತಿದ್ದ ಒಂದಾನೊಂದು ಕಾಲದ ಬಿಟಿಎಸ್ ಬಸ್ ನಿರ್ವಾಹಕ ಶಿವಾಜಿರಾವ್ ಗಾಯಕ್’ವಾಡ್ ಅಲಿಯಾಸ್ ರಜನಿಕಾಂತ್.

ಹೊಗೆನೆಕಲ್ ಯೋಜನೆ ನಿಲ್ಲಿಸಲು ಹೋರಾಟ ಮಾಡುವ ಕನ್ನಡಿಗರನ್ನು ಒದೆಯಬೇಡ್ವೆ ಎಂದು ವಿರಾವೇಶದಲ್ಲಿ ಒದರಿದ ಆಸಮಿ ಮರುದಿನ ತಾನು ಆ ಅರ್ಥದಲ್ಲಿ ಹೇಳೆ ಇಲ್ಲವೆಂದು ಉಲ್ಟ ಹೊಡೆಯೊದಾ!! ಅದೂ ಅಲ್ದೆ ಇವರು,ಇವರು,ಇವರು ಮತ್ತು ಇವರು ಹೇಳಿದರೆ ಮಾತ್ರ ಕ್ಷಮೆ ಯಾಚಿಸುತ್ತೆನೆಂದು ಗಾಯದ ಮೇಲೆ ಬರೆ ಎಳೆದರು. ತನ್ನ ಚಿತ್ರ ಬಹಿಷ್ಕರಿಸಿದರೆ ಕನ್ನಡಿಗರಿಗೆ ನಷ್ಟ ಎಂದು ಹೇಳಿ ಕನ್ನಡಿಗರ ಉಸಿರು ಈ ಶಿವಾಜಿರಾವ್ ಗಾಯಕ್ವಾಡ್’ನ ಚಿತ್ರದಲ್ಲಿ ಅಡಗಿದೆಯಾ ಎಂಬ ಅನುಮಾನ ಹುಟ್ಟಿಸಿದರು. ಈ ಮನುಷ್ಯನಿಗೆ ೨೫ ವರ್ಷಗಳ ಹಿಂದೆ ಕಿಕ್ಕಿರಿದ ಬಸ್ಸಿನಲ್ಲಿ ಪ್ರಯಾಣಿಕರ ಮೇಲೆ ರೆಗಾಡುತ್ತಿದ್ದ ಬುದ್ದಿ ಮತ್ತೆ ಮರುಕಳಿಸಿತಾ? ಎಂಥಾ ಚಿಲ್ರೆ ಮನುಷ್ಯ ಸ್ವಾಮಿ!!

ಇದೆಲ್ಲ ನೋಡಿದರೆ ಕನ್ನಡಿಗ ತನ್ನ ಅನ್ಯ ಭಾಷಾ ಪ್ರೇಮದಿಂದ ಯಾವ ಸ್ಥಿತಿಗೆ ತನ್ನನ್ನು ತಾನು ತಂದುಕೊಂಡಿದ್ದಾನೆಂದು ಸ್ಪಷ್ಟವಾಗುತ್ತದೆ. ಇವತ್ತು ಬೆಂಗಳೂರಿನಲ್ಲಿ ಎಐಡಿಂಕೆ ಎನ್ನುವ ತಮಿಳು ಪಕ್ಷ ೬ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆಯೆಂದರೆ ಬೆಂಗಳೂರಿನಲ್ಲಿ ತಮಿಳರ ಪ್ರಾಬಲ್ಯ ಯಾವ ಮಟ್ಟಕ್ಕೆ ಬೆಳದಿದೆ ನೋಡಿ. ನಾಳೆ ಇವರಲ್ಲಿ ಕನಿಷ್ಟ ಒಂದಿಬ್ಬರು ಆಯ್ಕೆಯಾದರು ಕನ್ನಡಿಗರಿಗೆ ತಲೆನೊವು ನಿಶ್ಚಿತ. ಇವರ ಬೆನ್ನ ಹಿಂದೆ ಶಿವಾಜಿರಾವ್’ನಂತಹ ನಟರು ಇದ್ದೆ ಇರುತ್ತಾರೆ.

ಇದೆನೆಲ್ಲ ನೋಡಿಯು ಕನ್ನಡಿಗರು ಸುಧಾರಿಸದಿದ್ದರೆ ಹೇಗೆ? ಕನ್ನಡಿಗರಿಗೆ ಈಗ ತಮ್ಮ ತಪ್ಪಿನ ಅರಿವಾಗಿದೆ ಎಂದು ಯಾರಾದರು ಉಲಿದರೆ ಅದಕ್ಕಿಂತ ಸಂತೋಷದ ಸುದ್ದಿ ಇನ್ನೋಂದಿಲ್ಲ. ರಜನಿಯಂತಹ ಘಜನಿಯನ್ನು ಪುಡಿಗಟ್ಟುವ ಸಾಮರ್ಥ್ಯ ಕನ್ನಡಿಗರಿಗೆ ಖಂಡಿತ ಇದೆ. ಮೊದಲು ಕನ್ನಡ ಆಮೇಲೆ ಇನ್ನೆಲ್ಲ.

ಇಂತಿ ನಿಮ್ಮ ಪ್ರೀತಿಯ,
ಅಧಿಕಪ್ರಸಂಗಿ

1 comment:

ಸುಧೇಶ್ ಶೆಟ್ಟಿ said...

ನಿಮ್ಮ ಬರಹಗಳನ್ನು ಓದಿದೆ. ನಿಮ್ಮ ಕನ್ನಡ ಪ್ರೀತಿಗೊ೦ದು ಶಹಬ್ಬಾಸ್.